ಅಂತೂ ಅಹಿಂದ ಹೀರೋ ಸಿದ್ದು ಗೆದ್ದರು...
ಸಿದ್ದರಾಮಯ್ಯ 1983ರಿಂದ 2006ರವರೆಗೆ ಸುಮಾರು 23 ವರ್ಷಗಳ ಕಾಲ ಕಾಂಗ್ರೆಸ್ ವಿರೋಧಿ ನೆಲೆಯಲ್ಲೇ ರಾಜಕೀಯದ ಕೆರಿಯರ್ ರೂಪಿಸಿಕೊಂಡು ಬಂದವರು. ಅಲ್ಲಿ ಪಕ್ಷದ ಪದಾಧಿಕಾರಿಯಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಅಧಿಕಾರದ ಎಲ್ಲ ಮೇಲ್ ಸ್ತರಗಳನ್ನು ತಾಕಿದವರು. ಅವರ ಒಂದೇ ಒಂದು ಕನಸು ಸಾಕಾರಗೊಳ್ಳದೇ ಉಳಿದಿದ್ದು ಮುಖ್ಯಮಂತ್ರಿ ಪಟ್ಟ.
ಮುಖ್ಯಮಂತ್ರಿ ಆಗುವ ಒನ್ ಪಾಯಿಂಟ್ ಪ್ರೋಗ್ರಾಂ ಇಟ್ಟುಕೊಂಡು ಕಾಂಗ್ರೆಸ್ ಸೇರಿ ಅಲ್ಪ ಅವಧಿಯಲ್ಲೇ ಆ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಇದನ್ನು ಚತುರತೆ ಅನ್ನಬೇಕೋ, ಅದೃಷ್ಟ ಅನ್ನಬೇಕೋ, ಹೋರಾಟಕ್ಕೆ (ಮುಖ್ಯಮಂತ್ರಿ ಪಟ್ಟಕ್ಕೆ) ಸಂದ ಜಯ ಅನ್ನಬೇಕೋ?.
2006ರಿಂದ ಈಚೆಗಷ್ಟೇ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿಕೊಂಡಿದ್ದು. ಅಹಿಂದ ಸಕ್ಸೆಸ್ ಹಿನ್ನೆಲೆಯಲ್ಲಿ ಸ್ಟಾರ್ ನಂತೆ ಠಳಾಯಿಸಿದರು. ಈಗ ಕೇವಲ 7 ವರ್ಷದ ಕಾಂಗ್ರೆಸ್ ಜೀವನದಲ್ಲಿ ಕನಸಿನ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ. ಇದು ಸಿದ್ದು ಪವಾಡವೂ ಹೌದು. ಕಾಂಗ್ರೆಸ್ ರಾಜಕೀಯ ಅನಿವಾರ್ಯತೆಯೂ ಹೌದು. ಖರ್ಗೆ, ಷರೀಫ, ಆಸ್ಕರ್ ಅಂಥವರ ದುರಾದೃಷ್ಟವೂ ಹೌದು. ಅಂತೂ ದಕ್ಷತೆಯ 'ಕೈ'ಗಾದರೂ ಅಧಿಕಾರದ ಸೂತ್ರ ದಕ್ಕುತ್ತಿದೆ.
ಬಿಜೆಪಿಯ ಹಿಂದೂತ್ವದ ಕಾರ್ಡ್ ಮತ್ತು ಹಿಂದು ಪೊಲರೈಸೇಷನ್ ಯತ್ನದ ಮೂಲಕ ಅದಕ್ಕೆ ಭದ್ರ ಬುನಾದಿ ಹಾಕಿಕೊಂಡೀತೆಂಬ ಭಯ ಕಾಂಗ್ರೆಸ್ ನಲ್ಲಿತ್ತು. ಹೀಗಾಗಿ ಅದಕ್ಕೆ ರಾಜ್ಯದ ಹಿಂದೂ ಪಾಕೆಟ್ ನಲ್ಲಿರುವ ಬಹುದೊಡ್ಡ ಸಂಖ್ಯೆಯ ಹಿಂದುಳಿದ ವರ್ಗಗಳನ್ನು ಬೇರ್ಪಡಿಸಿಕೊಳ್ಳಬೇಕಿತ್ತು. ಜತೆಗೆ ರಾಜ್ಯದ ಬಹುದೊಡ್ಡ ಸಂಖ್ಯೆಯ ಲಿಂಗಾಯತ ಕೋಮಿನವರನ್ನು ಬಿಜೆಪಿಯಿಂದ ಬೇರ್ಪಡಿಸಬೇಕಿತ್ತು. ಒಕ್ಕಲಿಗರಲ್ಲಿ ದೇವೇಗೌಡರ ಪ್ರಭಾವ ದಟ್ಟವಾಗುತ್ತ ಸಾಗುವುದನ್ನು ತಡೆಯಬೇಕಿತ್ತು.
ಕಾಂಗ್ರೆಸ್ ಇದನ್ನು ತುಂಬ ಜಾಣತನದಿಂದ ಸಾಧಿಸಿದೆ. ರೆಡ್ಡಿ, ಯಡಿಯೂರಪ್ಪಗೆ ಹಗರಣದ ಕುಣಿಕೆ ತೋರಿಸುವ ಮೂಲಕ ಬಿಜೆಪಿಯನ್ನು ಡೈಲೂಟ್ ಮಾಡಿತು. ಯಡಿಯೂರಪ್ಪ ಬಿಜೆಪಿ ತೊರೆಯಬೇಕಾಯಿತು. ಆ ಮೂಲಕ ಲಿಂಗಾಯತರಲ್ಲಿ ಬಿಜೆಪಿ ಬಗ್ಗೆ ಅಸಮಧಾನ ಮೂಡುವಂಥ ರಾಜಕೀಯ ಆಟವೊಂದು ನಡೆದು ಹೋಯಿತು.
ಗೌಡರ ಪಾಳೆಯದ ಬಹುದೊಡ್ಡ ಶಕ್ತಿ ಸಿದ್ದರಾಮಯ್ಯ ತಾನಾಗೇ ಹೊರಬರತೊಡಗಿದ್ದರು. ಕಾಂಗ್ರೆಸ್ ಬಾಗಿಲು ತಟ್ಟಿದರು. ಜಾಣತನದಿಂದ ಒಳಕ್ಕೆಳೆದುಕೊಂಡ ಕಾಂಗ್ರೆಸ್ ಅಹಿಂದ ಕಾರ್ಡ್ ಆಟಕ್ಕೆ ಸಿದ್ದು ಸೂಕ್ತ ಅಂದುಕೊಂಡಿತು. ಅದು ಯಶಸ್ವಿ ಕೂಡ ಆಯ್ತು.
ಎಸ್.ಎಂ. ಕೃಷ್ಟ ಮೂಲಕ ಡಿ.ಕೆ. ಶಿವಕುಮಾರ್ ಮತ್ತು ಇತರ ಸಾಧ್ಯತೆಗಳ ಮೂಲಕ ಒಕ್ಕಲಿಗರಲ್ಲಿ ಗೌಡರ ಪ್ರಭಾವವನ್ನು ತಕ್ಕಮಟ್ಟಿಗೆ ನಿಯಂತ್ರಿಸುವ ತಂತ್ರವೂ ಬಳಕೆಯಾಯ್ತು. ಪರಮೇಶ್ವರ್ ಸೋಲುವಂಥ ವಾತಾವರಣ ಸೃಷ್ಟಿಯಾಗಿದ್ದು ಮತ್ತೊಂದು ರಾಜಕೀಯ ಆಟ.
ಸಿದ್ದರಾಮಯ್ಯ ರಾಜಕೀಯ ನಡೆ
1983ರಲ್ಲಿ ಒಂದು ಅನಿರೀಕ್ಷಿತ ಗೆಲುವಿನ ಮೂಲಕ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸಿದರು. ಭಾರತೀಯ ಲೋಕ ದಳ ಅಭ್ಯರ್ಥಿಯಾಗಿ (ಚಾಮುಂಡೇಶ್ವರಿ ಕ್ಷೇತ್ರ) ಅವರು ಮೊದಲ ಚುನಾವಣೆ ಎದುರಿಸಿದರು.
* * *
ಜನತಾ ಪಾರ್ಟಿ ಸೇರುವ ಮೂಲಕ ಮೊದಲ ರಾಜಕೀಯ ಹೆಜ್ಜೆಯಲ್ಲೇ ಪಕ್ಷಾಂತರಕ್ಕೆ ತೆರಕೊಂಡವರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಆಗ ಗಮನ ಸೆಳೆದರು.
1985ರ ಮಧ್ಯಂತರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿಯಿಂದಲೇ ಮತ್ತೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಪಶುಸಂಗೋಪನಾ ಖಾತೆ ಸಚಿವರಾದರು. ಸಾರಿಗೆ, ರೇಷ್ಮೆ ಖಾತೆಗಳನ್ನೂ ನಿರ್ವಹಿಸಿದವರು.
1989ರಲ್ಲಿ ಕಾಂಗ್ರೆಸ್ ನ ರಾಜಶೇಖರ ಮೂರ್ತಿ ಎದುರು ಸೋತರು. ಇದು ಅವರ ಮೊದಲ ಸೋಲು.
* * *
ಈ ಜನತಾ ಪಕ್ಷ ರಾಷ್ಟ್ರಮಟ್ಟದಲ್ಲಿ ರೂಪುಗೊಂಡಿದ್ದರಿಂದ ಆದದ್ದೇನು? ಒಬ್ಬ ನೀಲಿಕಣ್ಣಿನ ಬ್ರಾಹ್ಮಣ ರಾಜಕಾರಣಿ ಮುರಾರ್ಜಿ ದೇಸಾಯಿ ಪ್ರಧಾನಿ ಆದರು. ಕರ್ನಾಟಕದಲ್ಲಿ ಬ್ರಾಹ್ಮಣ ರಾಜಕಾರಣಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದರು. ಮುರಾರ್ಜಿ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಂದಿರಾ ಗಾಂಧಿ ಪ್ರಧಾನಿ ಆಗಲು ಬಿಡುತ್ತಿದ್ದರೆ? ಹೀಗಾಗಿ ಜನತಾ ಪಕ್ಷದ ಮೂಲಕವೇ ಮುರಾರ್ಜಿ ಪ್ರಧಾನಿ ಪಟ್ಟಕ್ಕೇರಿದರು. ಇದಷ್ಟೇ ಜನತಾಪಕ್ಷದಿಂದ ಸಾಧ್ಯವಾಗಿದ್ದು. ಮುಂದೆ ಇದರಲ್ಲಿನ ಕೆಲವು ಮಹಾತ್ವಾಕಾಂಕ್ಷಿಗಳು ಬೇರೆ ರಾಜಕೀಯ ನೆಲೆಗಳಿಗೆ ಯತ್ನಿಸಿದರು. ಕೆಲವರು ತಕ್ಕಮಟ್ಟಿನ ಯಶಸ್ಸನ್ನೂ ಕಂಡರು.
* * *
ಜನತಾ ಪಕ್ಷದ ದರ್ಬಾರು ಮುಗಿದು ಹೋಯಿತು. ಜನತಾದಳ ರೂಪುಗೊಂಡಿತು.
1992ರಲ್ಲಿ ಸಿದ್ದರಾಮಯ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಗಳಾದರು. ಹೆಗಡೆ-ದೇವೇಗೌಡ ಪರಸ್ಪರ ಕೈಜೋಡಿಸಿದ್ದರಿಂದ ಜನತಾದಳ ಭರ್ಜರಿಯಾಗೇ ಹೊಸ ರಾಜಕೀಯ ಮನ್ವಂತರಕ್ಕಿಳಿದಿತ್ತು.
ಜನತಾದಳ ಕೂಡ ಇಬ್ಭಾಗವಾಯಿತು. ಹೆಗಡೆ-ಗೌಡ ಬೇರೆಯಾದರು. ದೇವೇಗೌಡ ನೇತೃತ್ವದಲ್ಲಿ ಜನತಾದಳ (ಎಸ್) ರೂಪುಗೊಂಡಿತು.
* * *
1994 ರಲ್ಲಿ ಸಿದ್ದರಾಮಯ್ಯ ಜನತಾದಳದಿಂದ ಸ್ಪರ್ಧಿಸಿ ವಿಧಾನಸಭೆಗೆ ಮತ್ತೆ ಆಯ್ಕೆಯಾದರು. ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರ ರಾಜ್ಯದಲ್ಲಿ ರೂಪುಗೊಂಡಿತು.
1996ರಲ್ಲಿ ಕಾಂಗ್ರೆಸ್ ಗೆ ಭಾರಿ ಏಟು ನೀಡಿದ ಜನತಾದಳ ಲೋಕಸಭೆಗೆ ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿತು. ಅನಿರೀಕ್ಷಿತ ಬೆಳೆವಣಿಗೆಯಲ್ಲಿ ದೇವೇಗೌಡ ಪ್ರಧಾನಿ ಪಟ್ಟಕ್ಕೇರಿದರು. ರಾಜ್ಯದ ಚುಕ್ಕಾಣಿಯನ್ನು ಜೆ.ಎಚ್. ಪಟೇಲ್ ಅವರಿಗೆ ವಹಿಸಿಕೊಟ್ಟರು. ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಿದ್ದು ಉಪಮುಖ್ಯಮಂತ್ರಿಯಾದರು. ಆಗಲೇ ಅವರಿಗೆ ಸಿಎಂ ಕುರ್ಚಿಯ ಗರಂ ಹವಾ ಬಡಿಯತೊಡಗಿತ್ತು. ದೇವೇಗೌಡರ ಮೇಲೆ ಗರಂ ಆಗಲು ಆರಂಭಿಸಿದ್ದು ಆಗಲೇ.
ಪಟೇಲ್-ಗೌಡ ಮುಸುಕಿನ ಗುದ್ದಾಟವೂ ನಡೆಯಿತು. ಹೆಗಡೆ-ಗೌಡ ಇರಿಸು ಮುರಿಸುಗಳ ಜಮಾನಾ ತಾರಕಕ್ಕೇರಿದ ಸಂದರ್ಭವೂ ಅದಾಗಿತ್ತು. ಗೌಡರು ಪ್ರಧಾನಿಯಾಗಲು ಪ್ರಮುಖ ಬೆಂಬಲವಾಗಿದ್ದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಬೆಂಬಲ ವಾಪಸ್ ಪಡೆದುಕೊಂಡಿತು. ಪ್ರಧಾನಿ ಗದ್ದುಗೆಯನ್ನು ಗುಜ್ರಾಲ್ ಗೆ ಕಳಕೊಂಡ ಗೌಡರು ನಿರಾಶರಾಗಿದ್ದರು. ಕಾಂಗ್ರೆಸ್ ವಿರುದ್ಧ ಗೌಡರು ಕತ್ತಿ ಮಸೆಯಲು ಶುರುವಿಟ್ಟುಕೊಂಡರು. ಇಬ್ರಾಹಿಂ, ಸಿದ್ದು ಗೌಡರ ಜತೆಯಲ್ಲೇ ಇದ್ದರು.
1999ರಲ್ಲಿ ಜನತಾದಳ ಕೂಡ ಇಬ್ಭಾಗವಾಯಿತು. ಪಟೇಲ್ ಪಾಳೆಯದವರು ಆಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಪರ ನಿಂತು ಜನತಾದಳ (ಯು) ಆದರೆ, ಇತ್ತ ದೇವೇಗೌಡರು ಸೆಕ್ಯುಲರ್ ಕಾರ್ಡ್ ಇಟ್ಟುಕೊಂಡು ಜನತಾದಳ (ಎಸ್) ರೂಪಿಸಿದರು. ಸಿದ್ದರಾಮಯ್ಯ ರಾಜ್ಯ ಘಟಕದ ಅಧ್ಯಕ್ಷರಾದರು. ಗೌಡರ ರಾಜಕೀಯದ ಗುರಿ, ಕಾಂಗ್ರೆಸ್ ನ ಸೆಕ್ಯುಲರ್ ಕಾರ್ಡ್ ತಳಪಾಯವನ್ನು ಅಲುಗಾಡಿಸಿ ತನ್ನತ್ತ ಸೆಳೆದುಕೊಳ್ಳುವುದಾಗಿತ್ತು.
1999ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತರು.
2004ರಲ್ಲಿ ಮತ್ತೆ ಗೆಲುವು ಕಂಡರು.
2004ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ರೂಪಿಸಿದ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟಕ್ಕೇರಿದರು. ಅದಾಗಲೇ ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಪ್ರಭಾವ ಶುರುವಾಗಿತ್ತು. ಇದು ಇಬ್ರಾಹಿಂ, ಸಿದ್ದರಾಮಯ್ಯ ಅವರನ್ನು ಕಂಗೆಡಿಸಿತ್ತು. ಸಿದ್ದರಾಮಯ್ಯ ಕೋಪಿಸಿಕೊಳ್ಳುವುದೂ ನಡೆದಿತ್ತು.ಇಬ್ರಾಹಿಂ ಹವಾ ಹಾಕಿ ಸಿದ್ದು ಅವರನ್ನು ಜೆಡಿಎಸ್ ನಿಂದ ಹೊರತಂದರು.
ಇದೇ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಬಿಜೆಪಿ ಸೇರಿಕೊಂಡಿದ್ದರಿಂದ ಬಿಜೆಪಿ ರಾಜ್ಯದಲ್ಲಿ ದೊಡ್ಡ ಶಕ್ತಿ ಪಡಕೊಂಡಿತ್ತು.
* * *
2006 ಚುನಾವಣೆ ಕರ್ನಾಟಕದ ಮಟ್ಟಿಗೆ ಅತ್ಯಂತ ಮಹತ್ವದ ಚುನಾವಣೆಯಾಗಿತ್ತು. ದಕ್ಷಿಣದಲ್ಲಿ ಕಣ್ಣು ತೆರೆಯುವದಕ್ಕೇ ಕಷ್ಟಪಡುತ್ತಿದ್ದ ಬಿಜೆಪಿ ತುಂಬ ಬೆಳೆದು ನಿಂತಿತ್ತು. ಫಲಿತಾಶ ಅತಂತ್ರ ಸ್ಥಿತಿಗೆ ನೂಕಿತ್ತು. ಜೆಡಿಎಸ್ ಸರ್ಕಾರ ರೂಪಿಸುವುದಕ್ಕೆ ಏನೆಲ್ಲ ಕಸರತ್ತುಗಳನ್ನು ನಡೆಸಿತ್ತು. ದಿಢೀರನೇ ಆದ ಬೆಳವಣಿಗೆಯಲ್ಲಿ "20:20 ಫಾರ್ಮುಲಾ" ಮೊತ್ತ ಮೊದಲ ಬಾರಿಗೆ ರಾಜ್ಯ ರಾಜಕಾರಣಕ್ಕೆ ಪರಿಚಯಗೊಂಡಿತು. ಇದರ ರೂವಾರಿಗಳಾದ ಕುಮಾರಸ್ವಾಮಿ-ಯಡಿಯೂರಪ್ಪ ಅಧಿಕಾರ ಹಂಚಿಕೆಯ ಷರತ್ತಿನೊಂದಿಗೆ ಸಮ್ಮಿಶ್ರ ಸರ್ಕಾರ ರೂಪಿಸಿಕೊಂಡರು. 20ರ ಇನಿಂಗ್ಸ್ ಮುಗಿಸಿದ ಕುಮಾರಸ್ವಾಮಿ ಮುಂದಿನ ಇನಿಂಗ್ಸ್ ಅನ್ನು ಯಡಿಯೂರಪ್ಪಗೆ ಬಿಟ್ಟಕೊಡಲಿಲ್ಲ. ರಾಜಕೀಯವಾಗಿ ಇದೊಂದು ಪಾಲಿಟಿಕಲಿ ಕರೆಕ್ಟ್ ಅನಿಸಿದರೂ "ವಚನಭ್ರಷ್ಟ" ಎನಿಸಿಕೊಂಡರು. ಸರ್ಕಾರ ಪತನಗೊಂಡಿತು.
ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟು ಕುಳಿತಿದ್ದ ಸಿದ್ದರಾಮಯ್ಯ ವಿಪರೀತ ಮುನಿಸಿಕೊಂಡಿದ್ದರು. ಸಿಎಂ ಖುರ್ಚಿ ಗರಂ ಹವಾ ಹಂಬಲ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಹೊರ ಹೋಗುವಂತೆ ಮಾಡಿತು.
2008 ಯಡಿಯೂರಪ್ಪ ಅನುಕಂಪದ ಅಲೆಯಿಂದ ಬಿಜೆಪಿ ಮೊತ್ತಮೊದಲ ಬಾರಿಗೆ ದಕ್ಷಿಣದಲ್ಲಿ ಅಧಿಕಾರದ ಕಾತೆ ತೆರೆಯಿತು.
* * *
ಸಿದ್ದರಾಮಯ್ಯ ಕಾಂಗ್ರೆಸ್ ಕೆರಿಯರ್ (2006-2013)
2006ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ತೊರೆದರು. ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಗೆದ್ದರು.
2008 ಕುಮಾರಸ್ವಾಮಿ ವಚನಭ್ರಷ್ಟ ವಿರೋಧಿ ಚಳವಳಿಯ ಮೂಲಕ ಯಡಿಯೂರಪ್ಪ ಬಿಜೆಪಿಗೆ ಮೊದಲ ಬಾರಿಗೆ ಮೂರಂಕಿ ದರ್ಶನ ಮಾಡಿಸಿದರು. ಆಪರೇಷನ್ ಕಮಲ ಇತ್ಯಾದಿ ಮೂಲಕ ಸರ್ಕಾರ ರೂಪಿಸಿಕೊಂಡರು. ಹಗರಣಗಳ ಮೇಲೆ ಹಗರಣ, ಗಣಿ ಉಪಟಳದ ನಡುವೆಯೂ ಮೂರು ವರ್ಷ ಅಧಿಕಾರ ನಡೆಸಿದರು.
ಇದೇ ಸಂದರ್ಭದಲ್ಲಿ ಅಹಿಂದ ಚಳವಳಿ ಪರಾಕಾಷ್ಠೆಗೆ ತಲುಪಿತ್ತು. ಸಿದ್ದರಾಮಯ್ಯ ಇದರ ರಿಯಲ್ ಹೀರೋ ಆಗಿ ಹೊರಹೊಮ್ಮಿದರು.
ರಾಜ್ಯದಲ್ಲಿ ಮೊದಲು ಜನತಾಪಕ್ಷ ಆನಂತರದಲ್ಲಿ ಜನತಾದಳ ಮತ್ತೀಗ ಬಿಜೆಪಿ ನೀಡಿದ ಏಟುಗಳಿಂದ ಕಾಂಗ್ರೆಸ್ ಬೇಸತ್ತುಕೊಂಡಿತ್ತು. ಈ ಎಲ್ಲ ಏಟುಗಳ ಹಿಂದೆ ದೇವೇಗೌಡರ ಸೆಕ್ಯುಲರ್ ರಾಜಕಾರಣದ ಕರಾಮತ್ತು ಎದ್ದು ಕಾಣಿಸುತ್ತಿತ್ತು. ಬಿಜೆಪಿ ಬೆಳೆಯುವುದಕ್ಕೂ ಕುಮಾರಸ್ವಾಮಿ ಮೂಲಕ ದೇವೇಗೌಡ ಪರೋಕ್ಷ ಕಾರಣ ಎನ್ನುವ ಅಂಶ ಕಾಂಗ್ರೆಸ್ ಗೂ ಮನವರಿಕೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ವಿರೋಧಿ ಫ್ಯಾಕ್ಟರ್ ಅನ್ನು ಹತ್ತಿಕ್ಕಲು ಕಾಂಗ್ರೆಸ್ ಗೆ ಒಂದು ಅಸ್ತ್ರ ತಕ್ಷಣಕ್ಕೆ ಬೇಕಿತ್ತು. ಆಗ ತಾನಾಗೇ ಕೈಗೆ ಸಿಕ್ಕಿದ್ದು ಸಿದ್ದರಾಮಯ್ಯ. ಅದೂ ವಿರೋಧಿ ಪಾಳೆಯದ ನೆಲೆಯಿಂದಲೇ. ಅವರ ಹೆಗಲ ಮೇಲೆ ಅಹಿಂದ ಅಸ್ತ್ರವನ್ನಿಟ್ಟು ಕಾಂಗ್ರೆಸ್ ತನ್ನ ಕೆಲಸವನ್ನು ಪೂರೈಸಿಕೊಂಡಿತು. ಜನಾರ್ಧನ ರೆಡ್ಡಿ ಎನ್ನುವ ದೊಡ್ಡ ವಿಕೇಟ್ ಹಾಕುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಗೆ ದೊಡ್ಡ ಶಾಕ್ ನೀಡಿತ್ತು. ಇಂಥ ನಿರ್ಣಾಯಕ ಹೋರಾಟದ ಸಂದರ್ಭದಲ್ಲಿ ಪ್ರತಿಪಕ್ಷದ ಹೊಣೆಯನ್ನು ಸಿದ್ದರಾಮಯ್ಯಗೆ ನೀಡುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಅನ್ನು ಏಕಕಾಲಕ್ಕೆ ಹಣಿಯುವ ತಂತ್ರವನ್ನು ಕಾಂಗ್ರೆಸ್ ಯಶಸ್ವಿಯಾಗೇ ನಿರ್ವಹಿಸಿತು.
ದೊಡ್ಡ ಕನಸು: ನಿರ್ಣಾಯಕ ಚುನಾವಣೆ
2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಗೆದ್ದರು. ವರುಣಾ ಕ್ಷೇತ್ರದ ಜನತೆಗೆ ಸಿಎಂ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುತ್ತಿರುವ ವಿಷಯ ಪಕ್ಕಾ ಆಗಿತ್ತೇನೋ. ಬಾರಿ ಮತಗಳಿಂದ ಸಿದ್ದರಾಮಯ್ಯ ಅವರನ್ನು ಅಲ್ಲಿನ ಜನ ಗೆಲ್ಲಿಸಿದರು.
ಸಿದ್ದು ನಾಯಕತ್ವ ಬೆಳೆಯುವುದಕ್ಕೆ ಪೂರಕವಾದ ಅಂಶಗಳು:
ಸಿದ್ದರಾಮಯ್ಯ ಅವರ ಮೂಲಕ ದೇವೇಗೌಡರನ್ನು ನಿಯಂತ್ರಿಸುವ ಕಾಂಗ್ರೆಸ್ ತಂತ್ರ ಆರಂಭದಿಂದಲೇ ಮಿಶ್ರಫಲ ಕೊಡುತ್ತಾ ಸಾಗಿತ್ತು. ಆದರೆ ಜೆಡಿಎಸ್ ಸ್ವಂತ ಬಲದಿಂದ ಸರ್ಕಾರ ರಚಿಸುವ ಸಂಕಲ್ಪದೊಂದಿಗೆ ಎದುರಿಸಿದ 2004 ಮತ್ತು 2008ರ ಚುನಾವಣೆಗಳು ಪಕ್ಷವನ್ನು ನಿರಾಶೆಗೊಳಿಸಿದವು. ಆದರೆ 2008ರಲ್ಲಿ ಗಣಿ ಧಣಿಗಳ ವಿರುದ್ಧ ನಡೆಸಿದ ಸಮರದಲ್ಲಿ ಅಹಿಂದದ ನಡಿಗೆ ಕೆಲಸ ಮಾಡಿತು. ಅದು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಬಲಗೊಳಿಸಿತು. ಹಿಂದುಳಿದ ವರ್ಗಗಳ ಪ್ರಭಾವದ ಅಹಿಂದ ಸಿದ್ದು ಗೆ ದೊಡ್ಡ ಸಾಥ್ ಕೊಟ್ಟಿತು. ಅವರು ರಿಯಲ್ ಹೀರೋ ಆಗಿ ಬೆಳೆದು ನಿಂತರು. ಗೌಡರನ್ನು ಮಣಿಸುವ ಬಹುತೇಕ ತಂತ್ರಗಳನ್ನು ಸಿದ್ದು ಮೂಲಕ ಸಾಧಿಸಿದ್ದು ಕಾಂಗ್ರೆಸ್ ನ ಬಹುಮುಖ್ಯ ರಣತಂತ್ರಗಳಲ್ಲೊಂದು.
ಸಿದ್ದು ನಾಯಕತ್ವ ಬೆಳೆಸುವುದಕ್ಕೆಂದೇ ಎನ್ನುವಂತೆ ರಾಜ್ಯ ಅಖಾಡಾದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಕೇಂದ್ರಕ್ಕೆ ಕರೆಸಿಕೊಂಡಿತು. ಕ್ಯಾಬಿನೆಟ್ ಹುದ್ದೆಯನ್ನೂ ನೀಡಿ ಕಟ್ಟಿಹಾಕಿತು. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ತಂದು ಆ ಭಾಗದಲ್ಲಿ ಭರ್ಜರಿ ಗೆಲುವು ತಂದುಕೊಟ್ಟವರು ಖರ್ಗೆ. ಎದುರಿಸಿದ ಎಲ್ಲ ಚುನಾವಣೆಗಳನ್ನು ಬಹುತೇಕ ಗೆದ್ದ ಖರ್ಗೆ ಯಾವತ್ತೂ ಪಕ್ಷಾಂತರ ಮಾಡಿದವರಲ್ಲ. ಕಟ್ಟಾ ಕಾಂಗ್ರೆಸ್ಸಿಗರಾಗಿ ಪಕ್ಷದಲ್ಲೇ ಉಳಿದವರು. ಮಂತ್ರಿಯಾಗಿ ಗೃಹ ಖಾತೆ ಸೇರಿ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ವೈಯಕ್ತಿಕ ವರ್ಚಸ್ಸು ಲೆಕ್ಕಿಸದೇ 40 ವರ್ಷಗಳ ಕಾಲ ಸತತ ಕಾಂಗ್ರೆಸ್ ಯಶಸ್ವಿಗೆ ಶ್ರಮಿಸಿದವರು. ಆದರೆ ಇದೆಲ್ಲ ಖರ್ಗೆ ಸಿಎಂ ಹಾದಿಗೆ ಸಾಕಾಗಲಿಲ್ಲ. ಸಿದ್ದು ಸ್ಟಾರ್ ಗಿರಿ ಎಲ್ಲವನ್ನೂ ಮಂಕಾಗಿಸಿತು.
ಸಿದ್ದು ಅದೃಷ್ಟವೋ ಏನೋ ಈ ಸಲ ಅಲ್ಪಸಂಖ್ಯಾತ ವರ್ಗದ ಯಾವ ಪ್ರಬಾವಿ ನಾಯಕರೂ ಮಿಂಚಲಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಹೇಳಿ ಮಾಡಿಸಿದಂತಿದ್ದ ಜಾಫರ್ ಷರೀಫ್ ಎನ್ನುವ ಹಳೆಯ ಹುಲಿ ತನ್ನ ಸಂಬಂಧಿಗಳ ಎರಡು ಸೀಟ್ ತರಲಾಗಲಿಲ್ಲ. ಅಥವಾ ಅವೆರಡು ಸೀಟುಗಳು ಬರದಂತೆ ಕೆಲ ಶಕ್ತಿಗಳು ನೋಡಿಕೊಂಡವೋ? ಕೊರಟಗೆರೆಯಲ್ಲಿ ಸಿಎಂ ಆಕಾಂಕ್ಷಿ ಅಭ್ಯರ್ಥಿ ಸೋಲು ಕಾಣಬೇಕಾಯಿತೆಂದರೆ ಏನರ್ಥವೋ? ಇದು ರಾಜಕೀಯ. ಕೋಟೆ ಕುಸಿದರೆ ಒಳಗಿನಿಂದಲೇ ಕುಸಿಯಬೇಕಲ್ಲವೇ? ಇನ್ನು ಆಸ್ಕರ್ ಫರ್ನಾಂಡಿಸ್ ಕೇಂದ್ರದಲ್ಲಿ ಪ್ರಭಾವವಿದ್ದರೂ ಕಾಂಗ್ರೆಸ್ ಅವರತ್ತ ಮನಸು ಮಾಡಲಿಲ್ಲ. ಖರ್ಗೆ ಬಿಟ್ಟರೆ ಸಿದ್ದುಗೆ ಬೇರೆ ಪ್ರತಿಸ್ಪರ್ಧಿಗಳೇ ಇರಲಿಲ್ಲ.
ಸಿದ್ದರಾಮಯ್ಯ 1983ರಿಂದ 2006ರವರೆಗೆ ಸುಮಾರು 23 ವರ್ಷಗಳ ಕಾಲ ಕಾಂಗ್ರೆಸ್ ವಿರೋಧಿ ನೆಲೆಯಲ್ಲೇ ರಾಜಕೀಯದ ಕೆರಿಯರ್ ರೂಪಿಸಿಕೊಂಡು ಬಂದವರು. ಅಲ್ಲಿ ಪಕ್ಷದ ಪದಾಧಿಕಾರಿಯಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಅಧಿಕಾರದ ಎಲ್ಲ ಮೇಲ್ ಸ್ತರಗಳನ್ನು ತಾಕಿದವರು. ಅವರ ಒಂದೇ ಒಂದು ಕನಸು ಸಾಕಾರಗೊಳ್ಳದೇ ಉಳಿದಿದ್ದು ಮುಖ್ಯಮಂತ್ರಿ ಪಟ್ಟ.
ಮುಖ್ಯಮಂತ್ರಿ ಆಗುವ ಒನ್ ಪಾಯಿಂಟ್ ಪ್ರೋಗ್ರಾಂ ಇಟ್ಟುಕೊಂಡು ಕಾಂಗ್ರೆಸ್ ಸೇರಿ ಅಲ್ಪ ಅವಧಿಯಲ್ಲೇ ಆ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ.
2006ರಿಂದ ಈಚೆಗಷ್ಟೇ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿಕೊಂಡಿದ್ದು. ಅಹಿಂದ ಸಕ್ಸೆಸ್ ಹಿನ್ನೆಲೆಯಲ್ಲಿ ಸ್ಟಾರ್ ನಂತೆ ಠಳಾಯಿಸಿದರು. ಈಗ ಕೇವಲ 7 ವರ್ಷದ ಕಾಂಗ್ರೆಸ್ ಜೀವನದಲ್ಲಿ ಕನಸಿನ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ. ಇದು ಸಿದ್ದು ಪವಾಡವೂ ಹೌದು. ಕಾಂಗ್ರೆಸ್ ರಾಜಕೀಯ ಅನಿವಾರ್ಯತೆಯೂ ಹೌದು. ಖರ್ಗೆ, ಷರೀಫ, ಆಸ್ಕರ್ ಅಂಥವರ ದುರಾದೃಷ್ಟವೂ ಹೌದು. ಅಂತೂ ದಕ್ಷತೆಯ 'ಕೈ'ಗಾದರೂ ಅಧಿಕಾರದ ಸೂತ್ರ ದಕ್ಕುತ್ತಿದೆ.
ಬಿಜೆಪಿಯ ಹಿಂದೂತ್ವದ ಕಾರ್ಡ್ ಮತ್ತು ಹಿಂದು ಪೊಲರೈಸೇಷನ್ ಯತ್ನದ ಮೂಲಕ ಅದಕ್ಕೆ ಭದ್ರ ಬುನಾದಿ ಹಾಕಿಕೊಂಡೀತೆಂಬ ಭಯ ಕಾಂಗ್ರೆಸ್ ನಲ್ಲಿತ್ತು. ಹೀಗಾಗಿ ಅದಕ್ಕೆ ರಾಜ್ಯದ ಹಿಂದೂ ಪಾಕೆಟ್ ನಲ್ಲಿರುವ ಬಹುದೊಡ್ಡ ಸಂಖ್ಯೆಯ ಹಿಂದುಳಿದ ವರ್ಗಗಳನ್ನು ಬೇರ್ಪಡಿಸಿಕೊಳ್ಳಬೇಕಿತ್ತು. ಜತೆಗೆ ರಾಜ್ಯದ ಬಹುದೊಡ್ಡ ಸಂಖ್ಯೆಯ ಲಿಂಗಾಯತ ಕೋಮಿನವರನ್ನು ಬಿಜೆಪಿಯಿಂದ ಬೇರ್ಪಡಿಸಬೇಕಿತ್ತು. ಒಕ್ಕಲಿಗರಲ್ಲಿ ದೇವೇಗೌಡರ ಪ್ರಭಾವ ದಟ್ಟವಾಗುತ್ತ ಸಾಗುವುದನ್ನು ತಡೆಯಬೇಕಿತ್ತು.
ಕಾಂಗ್ರೆಸ್ ಇದನ್ನು ತುಂಬ ಜಾಣತನದಿಂದ ಸಾಧಿಸಿದೆ. ರೆಡ್ಡಿ, ಯಡಿಯೂರಪ್ಪಗೆ ಹಗರಣದ ಕುಣಿಕೆ ತೋರಿಸುವ ಮೂಲಕ ಬಿಜೆಪಿಯನ್ನು ಡೈಲೂಟ್ ಮಾಡಿತು. ಯಡಿಯೂರಪ್ಪ ಬಿಜೆಪಿ ತೊರೆಯಬೇಕಾಯಿತು. ಆ ಮೂಲಕ ಲಿಂಗಾಯತರಲ್ಲಿ ಬಿಜೆಪಿ ಬಗ್ಗೆ ಅಸಮಧಾನ ಮೂಡುವಂಥ ರಾಜಕೀಯ ಆಟವೊಂದು ನಡೆದು ಹೋಯಿತು.
ಗೌಡರ ಪಾಳೆಯದ ಬಹುದೊಡ್ಡ ಶಕ್ತಿ ಸಿದ್ದರಾಮಯ್ಯ ತಾನಾಗೇ ಹೊರಬರತೊಡಗಿದ್ದರು. ಕಾಂಗ್ರೆಸ್ ಬಾಗಿಲು ತಟ್ಟಿದರು. ಜಾಣತನದಿಂದ ಒಳಕ್ಕೆಳೆದುಕೊಂಡ ಕಾಂಗ್ರೆಸ್ ಅಹಿಂದ ಕಾರ್ಡ್ ಆಟಕ್ಕೆ ಸಿದ್ದು ಸೂಕ್ತ ಅಂದುಕೊಂಡಿತು. ಅದು ಯಶಸ್ವಿ ಕೂಡ ಆಯ್ತು.
ಎಸ್.ಎಂ. ಕೃಷ್ಟ ಮೂಲಕ ಡಿ.ಕೆ. ಶಿವಕುಮಾರ್ ಮತ್ತು ಇತರ ಸಾಧ್ಯತೆಗಳ ಮೂಲಕ ಒಕ್ಕಲಿಗರಲ್ಲಿ ಗೌಡರ ಪ್ರಭಾವವನ್ನು ತಕ್ಕಮಟ್ಟಿಗೆ ನಿಯಂತ್ರಿಸುವ ತಂತ್ರವೂ ಬಳಕೆಯಾಯ್ತು. ಪರಮೇಶ್ವರ್ ಸೋಲುವಂಥ ವಾತಾವರಣ ಸೃಷ್ಟಿಯಾಗಿದ್ದು ಮತ್ತೊಂದು ರಾಜಕೀಯ ಆಟ.
ಸಿದ್ದರಾಮಯ್ಯ ರಾಜಕೀಯ ನಡೆ
1983ರಲ್ಲಿ ಒಂದು ಅನಿರೀಕ್ಷಿತ ಗೆಲುವಿನ ಮೂಲಕ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸಿದರು. ಭಾರತೀಯ ಲೋಕ ದಳ ಅಭ್ಯರ್ಥಿಯಾಗಿ (ಚಾಮುಂಡೇಶ್ವರಿ ಕ್ಷೇತ್ರ) ಅವರು ಮೊದಲ ಚುನಾವಣೆ ಎದುರಿಸಿದರು.
* * *
ಜನತಾ ಪಾರ್ಟಿ ಸೇರುವ ಮೂಲಕ ಮೊದಲ ರಾಜಕೀಯ ಹೆಜ್ಜೆಯಲ್ಲೇ ಪಕ್ಷಾಂತರಕ್ಕೆ ತೆರಕೊಂಡವರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಆಗ ಗಮನ ಸೆಳೆದರು.
1985ರ ಮಧ್ಯಂತರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿಯಿಂದಲೇ ಮತ್ತೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಪಶುಸಂಗೋಪನಾ ಖಾತೆ ಸಚಿವರಾದರು. ಸಾರಿಗೆ, ರೇಷ್ಮೆ ಖಾತೆಗಳನ್ನೂ ನಿರ್ವಹಿಸಿದವರು.
1989ರಲ್ಲಿ ಕಾಂಗ್ರೆಸ್ ನ ರಾಜಶೇಖರ ಮೂರ್ತಿ ಎದುರು ಸೋತರು. ಇದು ಅವರ ಮೊದಲ ಸೋಲು.
* * *
ಈ ಜನತಾ ಪಕ್ಷ ರಾಷ್ಟ್ರಮಟ್ಟದಲ್ಲಿ ರೂಪುಗೊಂಡಿದ್ದರಿಂದ ಆದದ್ದೇನು? ಒಬ್ಬ ನೀಲಿಕಣ್ಣಿನ ಬ್ರಾಹ್ಮಣ ರಾಜಕಾರಣಿ ಮುರಾರ್ಜಿ ದೇಸಾಯಿ ಪ್ರಧಾನಿ ಆದರು. ಕರ್ನಾಟಕದಲ್ಲಿ ಬ್ರಾಹ್ಮಣ ರಾಜಕಾರಣಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದರು. ಮುರಾರ್ಜಿ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಂದಿರಾ ಗಾಂಧಿ ಪ್ರಧಾನಿ ಆಗಲು ಬಿಡುತ್ತಿದ್ದರೆ? ಹೀಗಾಗಿ ಜನತಾ ಪಕ್ಷದ ಮೂಲಕವೇ ಮುರಾರ್ಜಿ ಪ್ರಧಾನಿ ಪಟ್ಟಕ್ಕೇರಿದರು. ಇದಷ್ಟೇ ಜನತಾಪಕ್ಷದಿಂದ ಸಾಧ್ಯವಾಗಿದ್ದು. ಮುಂದೆ ಇದರಲ್ಲಿನ ಕೆಲವು ಮಹಾತ್ವಾಕಾಂಕ್ಷಿಗಳು ಬೇರೆ ರಾಜಕೀಯ ನೆಲೆಗಳಿಗೆ ಯತ್ನಿಸಿದರು. ಕೆಲವರು ತಕ್ಕಮಟ್ಟಿನ ಯಶಸ್ಸನ್ನೂ ಕಂಡರು.
* * *
ಜನತಾ ಪಕ್ಷದ ದರ್ಬಾರು ಮುಗಿದು ಹೋಯಿತು. ಜನತಾದಳ ರೂಪುಗೊಂಡಿತು.
1992ರಲ್ಲಿ ಸಿದ್ದರಾಮಯ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಗಳಾದರು. ಹೆಗಡೆ-ದೇವೇಗೌಡ ಪರಸ್ಪರ ಕೈಜೋಡಿಸಿದ್ದರಿಂದ ಜನತಾದಳ ಭರ್ಜರಿಯಾಗೇ ಹೊಸ ರಾಜಕೀಯ ಮನ್ವಂತರಕ್ಕಿಳಿದಿತ್ತು.
ಜನತಾದಳ ಕೂಡ ಇಬ್ಭಾಗವಾಯಿತು. ಹೆಗಡೆ-ಗೌಡ ಬೇರೆಯಾದರು. ದೇವೇಗೌಡ ನೇತೃತ್ವದಲ್ಲಿ ಜನತಾದಳ (ಎಸ್) ರೂಪುಗೊಂಡಿತು.
* * *
1994 ರಲ್ಲಿ ಸಿದ್ದರಾಮಯ್ಯ ಜನತಾದಳದಿಂದ ಸ್ಪರ್ಧಿಸಿ ವಿಧಾನಸಭೆಗೆ ಮತ್ತೆ ಆಯ್ಕೆಯಾದರು. ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರ ರಾಜ್ಯದಲ್ಲಿ ರೂಪುಗೊಂಡಿತು.
1996ರಲ್ಲಿ ಕಾಂಗ್ರೆಸ್ ಗೆ ಭಾರಿ ಏಟು ನೀಡಿದ ಜನತಾದಳ ಲೋಕಸಭೆಗೆ ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿತು. ಅನಿರೀಕ್ಷಿತ ಬೆಳೆವಣಿಗೆಯಲ್ಲಿ ದೇವೇಗೌಡ ಪ್ರಧಾನಿ ಪಟ್ಟಕ್ಕೇರಿದರು. ರಾಜ್ಯದ ಚುಕ್ಕಾಣಿಯನ್ನು ಜೆ.ಎಚ್. ಪಟೇಲ್ ಅವರಿಗೆ ವಹಿಸಿಕೊಟ್ಟರು. ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಿದ್ದು ಉಪಮುಖ್ಯಮಂತ್ರಿಯಾದರು. ಆಗಲೇ ಅವರಿಗೆ ಸಿಎಂ ಕುರ್ಚಿಯ ಗರಂ ಹವಾ ಬಡಿಯತೊಡಗಿತ್ತು. ದೇವೇಗೌಡರ ಮೇಲೆ ಗರಂ ಆಗಲು ಆರಂಭಿಸಿದ್ದು ಆಗಲೇ.
ಪಟೇಲ್-ಗೌಡ ಮುಸುಕಿನ ಗುದ್ದಾಟವೂ ನಡೆಯಿತು. ಹೆಗಡೆ-ಗೌಡ ಇರಿಸು ಮುರಿಸುಗಳ ಜಮಾನಾ ತಾರಕಕ್ಕೇರಿದ ಸಂದರ್ಭವೂ ಅದಾಗಿತ್ತು. ಗೌಡರು ಪ್ರಧಾನಿಯಾಗಲು ಪ್ರಮುಖ ಬೆಂಬಲವಾಗಿದ್ದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಬೆಂಬಲ ವಾಪಸ್ ಪಡೆದುಕೊಂಡಿತು. ಪ್ರಧಾನಿ ಗದ್ದುಗೆಯನ್ನು ಗುಜ್ರಾಲ್ ಗೆ ಕಳಕೊಂಡ ಗೌಡರು ನಿರಾಶರಾಗಿದ್ದರು. ಕಾಂಗ್ರೆಸ್ ವಿರುದ್ಧ ಗೌಡರು ಕತ್ತಿ ಮಸೆಯಲು ಶುರುವಿಟ್ಟುಕೊಂಡರು. ಇಬ್ರಾಹಿಂ, ಸಿದ್ದು ಗೌಡರ ಜತೆಯಲ್ಲೇ ಇದ್ದರು.
1999ರಲ್ಲಿ ಜನತಾದಳ ಕೂಡ ಇಬ್ಭಾಗವಾಯಿತು. ಪಟೇಲ್ ಪಾಳೆಯದವರು ಆಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಪರ ನಿಂತು ಜನತಾದಳ (ಯು) ಆದರೆ, ಇತ್ತ ದೇವೇಗೌಡರು ಸೆಕ್ಯುಲರ್ ಕಾರ್ಡ್ ಇಟ್ಟುಕೊಂಡು ಜನತಾದಳ (ಎಸ್) ರೂಪಿಸಿದರು. ಸಿದ್ದರಾಮಯ್ಯ ರಾಜ್ಯ ಘಟಕದ ಅಧ್ಯಕ್ಷರಾದರು. ಗೌಡರ ರಾಜಕೀಯದ ಗುರಿ, ಕಾಂಗ್ರೆಸ್ ನ ಸೆಕ್ಯುಲರ್ ಕಾರ್ಡ್ ತಳಪಾಯವನ್ನು ಅಲುಗಾಡಿಸಿ ತನ್ನತ್ತ ಸೆಳೆದುಕೊಳ್ಳುವುದಾಗಿತ್ತು.
1999ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತರು.
2004ರಲ್ಲಿ ಮತ್ತೆ ಗೆಲುವು ಕಂಡರು.
2004ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ರೂಪಿಸಿದ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟಕ್ಕೇರಿದರು. ಅದಾಗಲೇ ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಪ್ರಭಾವ ಶುರುವಾಗಿತ್ತು. ಇದು ಇಬ್ರಾಹಿಂ, ಸಿದ್ದರಾಮಯ್ಯ ಅವರನ್ನು ಕಂಗೆಡಿಸಿತ್ತು. ಸಿದ್ದರಾಮಯ್ಯ ಕೋಪಿಸಿಕೊಳ್ಳುವುದೂ ನಡೆದಿತ್ತು.ಇಬ್ರಾಹಿಂ ಹವಾ ಹಾಕಿ ಸಿದ್ದು ಅವರನ್ನು ಜೆಡಿಎಸ್ ನಿಂದ ಹೊರತಂದರು.
ಇದೇ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಬಿಜೆಪಿ ಸೇರಿಕೊಂಡಿದ್ದರಿಂದ ಬಿಜೆಪಿ ರಾಜ್ಯದಲ್ಲಿ ದೊಡ್ಡ ಶಕ್ತಿ ಪಡಕೊಂಡಿತ್ತು.
* * *
2006 ಚುನಾವಣೆ ಕರ್ನಾಟಕದ ಮಟ್ಟಿಗೆ ಅತ್ಯಂತ ಮಹತ್ವದ ಚುನಾವಣೆಯಾಗಿತ್ತು. ದಕ್ಷಿಣದಲ್ಲಿ ಕಣ್ಣು ತೆರೆಯುವದಕ್ಕೇ ಕಷ್ಟಪಡುತ್ತಿದ್ದ ಬಿಜೆಪಿ ತುಂಬ ಬೆಳೆದು ನಿಂತಿತ್ತು. ಫಲಿತಾಶ ಅತಂತ್ರ ಸ್ಥಿತಿಗೆ ನೂಕಿತ್ತು. ಜೆಡಿಎಸ್ ಸರ್ಕಾರ ರೂಪಿಸುವುದಕ್ಕೆ ಏನೆಲ್ಲ ಕಸರತ್ತುಗಳನ್ನು ನಡೆಸಿತ್ತು. ದಿಢೀರನೇ ಆದ ಬೆಳವಣಿಗೆಯಲ್ಲಿ "20:20 ಫಾರ್ಮುಲಾ" ಮೊತ್ತ ಮೊದಲ ಬಾರಿಗೆ ರಾಜ್ಯ ರಾಜಕಾರಣಕ್ಕೆ ಪರಿಚಯಗೊಂಡಿತು. ಇದರ ರೂವಾರಿಗಳಾದ ಕುಮಾರಸ್ವಾಮಿ-ಯಡಿಯೂರಪ್ಪ ಅಧಿಕಾರ ಹಂಚಿಕೆಯ ಷರತ್ತಿನೊಂದಿಗೆ ಸಮ್ಮಿಶ್ರ ಸರ್ಕಾರ ರೂಪಿಸಿಕೊಂಡರು. 20ರ ಇನಿಂಗ್ಸ್ ಮುಗಿಸಿದ ಕುಮಾರಸ್ವಾಮಿ ಮುಂದಿನ ಇನಿಂಗ್ಸ್ ಅನ್ನು ಯಡಿಯೂರಪ್ಪಗೆ ಬಿಟ್ಟಕೊಡಲಿಲ್ಲ. ರಾಜಕೀಯವಾಗಿ ಇದೊಂದು ಪಾಲಿಟಿಕಲಿ ಕರೆಕ್ಟ್ ಅನಿಸಿದರೂ "ವಚನಭ್ರಷ್ಟ" ಎನಿಸಿಕೊಂಡರು. ಸರ್ಕಾರ ಪತನಗೊಂಡಿತು.
ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟು ಕುಳಿತಿದ್ದ ಸಿದ್ದರಾಮಯ್ಯ ವಿಪರೀತ ಮುನಿಸಿಕೊಂಡಿದ್ದರು. ಸಿಎಂ ಖುರ್ಚಿ ಗರಂ ಹವಾ ಹಂಬಲ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಹೊರ ಹೋಗುವಂತೆ ಮಾಡಿತು.
2008 ಯಡಿಯೂರಪ್ಪ ಅನುಕಂಪದ ಅಲೆಯಿಂದ ಬಿಜೆಪಿ ಮೊತ್ತಮೊದಲ ಬಾರಿಗೆ ದಕ್ಷಿಣದಲ್ಲಿ ಅಧಿಕಾರದ ಕಾತೆ ತೆರೆಯಿತು.
* * *
ಸಿದ್ದರಾಮಯ್ಯ ಕಾಂಗ್ರೆಸ್ ಕೆರಿಯರ್ (2006-2013)
2006ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ತೊರೆದರು. ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಗೆದ್ದರು.
2008 ಕುಮಾರಸ್ವಾಮಿ ವಚನಭ್ರಷ್ಟ ವಿರೋಧಿ ಚಳವಳಿಯ ಮೂಲಕ ಯಡಿಯೂರಪ್ಪ ಬಿಜೆಪಿಗೆ ಮೊದಲ ಬಾರಿಗೆ ಮೂರಂಕಿ ದರ್ಶನ ಮಾಡಿಸಿದರು. ಆಪರೇಷನ್ ಕಮಲ ಇತ್ಯಾದಿ ಮೂಲಕ ಸರ್ಕಾರ ರೂಪಿಸಿಕೊಂಡರು. ಹಗರಣಗಳ ಮೇಲೆ ಹಗರಣ, ಗಣಿ ಉಪಟಳದ ನಡುವೆಯೂ ಮೂರು ವರ್ಷ ಅಧಿಕಾರ ನಡೆಸಿದರು.
ಇದೇ ಸಂದರ್ಭದಲ್ಲಿ ಅಹಿಂದ ಚಳವಳಿ ಪರಾಕಾಷ್ಠೆಗೆ ತಲುಪಿತ್ತು. ಸಿದ್ದರಾಮಯ್ಯ ಇದರ ರಿಯಲ್ ಹೀರೋ ಆಗಿ ಹೊರಹೊಮ್ಮಿದರು.
ರಾಜ್ಯದಲ್ಲಿ ಮೊದಲು ಜನತಾಪಕ್ಷ ಆನಂತರದಲ್ಲಿ ಜನತಾದಳ ಮತ್ತೀಗ ಬಿಜೆಪಿ ನೀಡಿದ ಏಟುಗಳಿಂದ ಕಾಂಗ್ರೆಸ್ ಬೇಸತ್ತುಕೊಂಡಿತ್ತು. ಈ ಎಲ್ಲ ಏಟುಗಳ ಹಿಂದೆ ದೇವೇಗೌಡರ ಸೆಕ್ಯುಲರ್ ರಾಜಕಾರಣದ ಕರಾಮತ್ತು ಎದ್ದು ಕಾಣಿಸುತ್ತಿತ್ತು. ಬಿಜೆಪಿ ಬೆಳೆಯುವುದಕ್ಕೂ ಕುಮಾರಸ್ವಾಮಿ ಮೂಲಕ ದೇವೇಗೌಡ ಪರೋಕ್ಷ ಕಾರಣ ಎನ್ನುವ ಅಂಶ ಕಾಂಗ್ರೆಸ್ ಗೂ ಮನವರಿಕೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ವಿರೋಧಿ ಫ್ಯಾಕ್ಟರ್ ಅನ್ನು ಹತ್ತಿಕ್ಕಲು ಕಾಂಗ್ರೆಸ್ ಗೆ ಒಂದು ಅಸ್ತ್ರ ತಕ್ಷಣಕ್ಕೆ ಬೇಕಿತ್ತು. ಆಗ ತಾನಾಗೇ ಕೈಗೆ ಸಿಕ್ಕಿದ್ದು ಸಿದ್ದರಾಮಯ್ಯ. ಅದೂ ವಿರೋಧಿ ಪಾಳೆಯದ ನೆಲೆಯಿಂದಲೇ. ಅವರ ಹೆಗಲ ಮೇಲೆ ಅಹಿಂದ ಅಸ್ತ್ರವನ್ನಿಟ್ಟು ಕಾಂಗ್ರೆಸ್ ತನ್ನ ಕೆಲಸವನ್ನು ಪೂರೈಸಿಕೊಂಡಿತು. ಜನಾರ್ಧನ ರೆಡ್ಡಿ ಎನ್ನುವ ದೊಡ್ಡ ವಿಕೇಟ್ ಹಾಕುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಗೆ ದೊಡ್ಡ ಶಾಕ್ ನೀಡಿತ್ತು. ಇಂಥ ನಿರ್ಣಾಯಕ ಹೋರಾಟದ ಸಂದರ್ಭದಲ್ಲಿ ಪ್ರತಿಪಕ್ಷದ ಹೊಣೆಯನ್ನು ಸಿದ್ದರಾಮಯ್ಯಗೆ ನೀಡುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಅನ್ನು ಏಕಕಾಲಕ್ಕೆ ಹಣಿಯುವ ತಂತ್ರವನ್ನು ಕಾಂಗ್ರೆಸ್ ಯಶಸ್ವಿಯಾಗೇ ನಿರ್ವಹಿಸಿತು.
ದೊಡ್ಡ ಕನಸು: ನಿರ್ಣಾಯಕ ಚುನಾವಣೆ
2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಗೆದ್ದರು. ವರುಣಾ ಕ್ಷೇತ್ರದ ಜನತೆಗೆ ಸಿಎಂ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುತ್ತಿರುವ ವಿಷಯ ಪಕ್ಕಾ ಆಗಿತ್ತೇನೋ. ಬಾರಿ ಮತಗಳಿಂದ ಸಿದ್ದರಾಮಯ್ಯ ಅವರನ್ನು ಅಲ್ಲಿನ ಜನ ಗೆಲ್ಲಿಸಿದರು.
ಸಿದ್ದು ನಾಯಕತ್ವ ಬೆಳೆಯುವುದಕ್ಕೆ ಪೂರಕವಾದ ಅಂಶಗಳು:
ಸಿದ್ದರಾಮಯ್ಯ ಅವರ ಮೂಲಕ ದೇವೇಗೌಡರನ್ನು ನಿಯಂತ್ರಿಸುವ ಕಾಂಗ್ರೆಸ್ ತಂತ್ರ ಆರಂಭದಿಂದಲೇ ಮಿಶ್ರಫಲ ಕೊಡುತ್ತಾ ಸಾಗಿತ್ತು. ಆದರೆ ಜೆಡಿಎಸ್ ಸ್ವಂತ ಬಲದಿಂದ ಸರ್ಕಾರ ರಚಿಸುವ ಸಂಕಲ್ಪದೊಂದಿಗೆ ಎದುರಿಸಿದ 2004 ಮತ್ತು 2008ರ ಚುನಾವಣೆಗಳು ಪಕ್ಷವನ್ನು ನಿರಾಶೆಗೊಳಿಸಿದವು. ಆದರೆ 2008ರಲ್ಲಿ ಗಣಿ ಧಣಿಗಳ ವಿರುದ್ಧ ನಡೆಸಿದ ಸಮರದಲ್ಲಿ ಅಹಿಂದದ ನಡಿಗೆ ಕೆಲಸ ಮಾಡಿತು. ಅದು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಬಲಗೊಳಿಸಿತು. ಹಿಂದುಳಿದ ವರ್ಗಗಳ ಪ್ರಭಾವದ ಅಹಿಂದ ಸಿದ್ದು ಗೆ ದೊಡ್ಡ ಸಾಥ್ ಕೊಟ್ಟಿತು. ಅವರು ರಿಯಲ್ ಹೀರೋ ಆಗಿ ಬೆಳೆದು ನಿಂತರು. ಗೌಡರನ್ನು ಮಣಿಸುವ ಬಹುತೇಕ ತಂತ್ರಗಳನ್ನು ಸಿದ್ದು ಮೂಲಕ ಸಾಧಿಸಿದ್ದು ಕಾಂಗ್ರೆಸ್ ನ ಬಹುಮುಖ್ಯ ರಣತಂತ್ರಗಳಲ್ಲೊಂದು.
ಸಿದ್ದು ನಾಯಕತ್ವ ಬೆಳೆಸುವುದಕ್ಕೆಂದೇ ಎನ್ನುವಂತೆ ರಾಜ್ಯ ಅಖಾಡಾದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಕೇಂದ್ರಕ್ಕೆ ಕರೆಸಿಕೊಂಡಿತು. ಕ್ಯಾಬಿನೆಟ್ ಹುದ್ದೆಯನ್ನೂ ನೀಡಿ ಕಟ್ಟಿಹಾಕಿತು. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ತಂದು ಆ ಭಾಗದಲ್ಲಿ ಭರ್ಜರಿ ಗೆಲುವು ತಂದುಕೊಟ್ಟವರು ಖರ್ಗೆ. ಎದುರಿಸಿದ ಎಲ್ಲ ಚುನಾವಣೆಗಳನ್ನು ಬಹುತೇಕ ಗೆದ್ದ ಖರ್ಗೆ ಯಾವತ್ತೂ ಪಕ್ಷಾಂತರ ಮಾಡಿದವರಲ್ಲ. ಕಟ್ಟಾ ಕಾಂಗ್ರೆಸ್ಸಿಗರಾಗಿ ಪಕ್ಷದಲ್ಲೇ ಉಳಿದವರು. ಮಂತ್ರಿಯಾಗಿ ಗೃಹ ಖಾತೆ ಸೇರಿ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ವೈಯಕ್ತಿಕ ವರ್ಚಸ್ಸು ಲೆಕ್ಕಿಸದೇ 40 ವರ್ಷಗಳ ಕಾಲ ಸತತ ಕಾಂಗ್ರೆಸ್ ಯಶಸ್ವಿಗೆ ಶ್ರಮಿಸಿದವರು. ಆದರೆ ಇದೆಲ್ಲ ಖರ್ಗೆ ಸಿಎಂ ಹಾದಿಗೆ ಸಾಕಾಗಲಿಲ್ಲ. ಸಿದ್ದು ಸ್ಟಾರ್ ಗಿರಿ ಎಲ್ಲವನ್ನೂ ಮಂಕಾಗಿಸಿತು.
ಸಿದ್ದು ಅದೃಷ್ಟವೋ ಏನೋ ಈ ಸಲ ಅಲ್ಪಸಂಖ್ಯಾತ ವರ್ಗದ ಯಾವ ಪ್ರಬಾವಿ ನಾಯಕರೂ ಮಿಂಚಲಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಹೇಳಿ ಮಾಡಿಸಿದಂತಿದ್ದ ಜಾಫರ್ ಷರೀಫ್ ಎನ್ನುವ ಹಳೆಯ ಹುಲಿ ತನ್ನ ಸಂಬಂಧಿಗಳ ಎರಡು ಸೀಟ್ ತರಲಾಗಲಿಲ್ಲ. ಅಥವಾ ಅವೆರಡು ಸೀಟುಗಳು ಬರದಂತೆ ಕೆಲ ಶಕ್ತಿಗಳು ನೋಡಿಕೊಂಡವೋ? ಕೊರಟಗೆರೆಯಲ್ಲಿ ಸಿಎಂ ಆಕಾಂಕ್ಷಿ ಅಭ್ಯರ್ಥಿ ಸೋಲು ಕಾಣಬೇಕಾಯಿತೆಂದರೆ ಏನರ್ಥವೋ? ಇದು ರಾಜಕೀಯ. ಕೋಟೆ ಕುಸಿದರೆ ಒಳಗಿನಿಂದಲೇ ಕುಸಿಯಬೇಕಲ್ಲವೇ? ಇನ್ನು ಆಸ್ಕರ್ ಫರ್ನಾಂಡಿಸ್ ಕೇಂದ್ರದಲ್ಲಿ ಪ್ರಭಾವವಿದ್ದರೂ ಕಾಂಗ್ರೆಸ್ ಅವರತ್ತ ಮನಸು ಮಾಡಲಿಲ್ಲ. ಖರ್ಗೆ ಬಿಟ್ಟರೆ ಸಿದ್ದುಗೆ ಬೇರೆ ಪ್ರತಿಸ್ಪರ್ಧಿಗಳೇ ಇರಲಿಲ್ಲ.